ಆರ್ಥಿಕ ಬಿಕ್ಕಟ್ಟಿನಿಂದ ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ. ಮುತ್ತಿಗೆ ಹಾಕುವ ಮೊದಲು ರಾಜಪಕ್ಸೆ ಅವರನ್ನು ಅಧಿಕೃತ ನಿವಾಸದಿಂದ ಕರೆದೊಯ್ಯಲಾಯಿತು.
ಜನಸಂದಣಿಯು ಅಧ್ಯಕ್ಷೀಯ ಭವನದ ಗೇಟ್ ಗಳ ಬಳಿ ಹೆಚ್ಚಾದಂತೆ ರಾಜಪಕ್ಸೆ ಅವರನ್ನು ಸುರಕ್ಷಿತವಾಗಿ ಕರೆದೊಯ್ಯುವ ಮುನ್ನ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸದತ್ತ ಸುಳಿಯದಂತೆ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ರಾಜಪಕ್ಸೆ ಅವರನ್ನು ಬೇರೆಡೆಗೆ ಕರೆದೊಯ್ಯಲಾಯಿತು.
ಸಾಮಾಜಿಕ ಮಾಧ್ಯಮದಲ್ಲಿ ನೇರ ಪ್ರಸಾರವಾದ ದೃಶ್ಯಾವಳಿಗಳು ನೂರಾರು ಜನರು ಅರಮನೆಯ ಮೂಲಕ ನಡೆದುಕೊಂಡು ಹೋಗುವುದನ್ನು ತೋರಿಸಿವೆ. ಕೆಲವರು ಅಧ್ಯಕ್ಷರ ನಿವಾಸದಲ್ಲಿದ್ದ ಈಜುಕೊಳದಲ್ಲಿ ಈಜುತ್ತಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ವಸಾಹತುಶಾಹಿ ಯುಗದ ರಾಜಭವನವು ಶ್ರೀಲಂಕಾದ ರಾಜ್ಯ ಅಧಿಕಾರದ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ. ರಾಜಪಕ್ಸೆ ಅವರ ನಿರ್ಗಮನವು ಅವರ ಕಚೇರಿಯಲ್ಲಿ ಉಳಿಯಲು ಉದ್ದೇಶಿಸಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಾಸಗಿ ಪ್ರಸಾರಕರು ಶ್ರೀಲಂಕಾದ ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷರಿಗೆ ಸೇರಿದ ವಾಹನದ ಬೆಂಗಾವಲು ಪಡೆ ಎಂದು ತೋರಿಸಿವೆ. ಆದರೆ ಅವರು ದ್ವೀಪವನ್ನು ತೊರೆದಿದ್ದಾರೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸೇನೆ ಅಶ್ರುವಾಯು ದಾಳಿ ಮಾಡಿದೆ. ಇದರಿಂದ ಉಸಿರಾಟದ ತೊಂದರೆ ಅನುಭವಿಸಿದ 36 ಮಂದಿಯ ಮತ್ತು ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಲಂಬೊದ ಮುಖ್ಯ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.