Friday, September 20, 2024
Google search engine
Homeಮುಖಪುಟದೇಶದ ಕ್ಷಮೆ ಯಾಚಿಸಲು ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ತಾಕೀತು

ದೇಶದ ಕ್ಷಮೆ ಯಾಚಿಸಲು ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ತಾಕೀತು

ಪ್ರವಾದಿ ಮೊಹಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ದೇಶದಲ್ಲಿ ಗಲಭೆಗೆ ಕಾರಣರಾದ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಬಹಿರಂಗವಾಗಿ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.

ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಈ ಒಬ್ಬ ಮಹಿಳೆಯೇ ಹೊಣೆಗಾರರಾಗಿದ್ದು ಅವರು ದೇಶದ ಕ್ಷಮೆ ಕೇಳಬೇಕು ಎಂದು ಹೇಳಿದೆ.

ರಜಾಕಾಲದ ದ್ವಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿವಿಧ ರಾಜ್ಯಗಳಲ್ಲಿ ದಾಖಲಾದ ಎಫ್ಐಆರ್ ಗಳನ್ನು ಒಂದೆಡೆ ಸೇರಿಸುವಂತೆ ಕೋರಿ ಶರ್ಮಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡರು.

ನೂಪುರ್ ಶರ್ಮಾ ಅವರ ಹೇಳಿಕೆಯಿಂದ ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಈ ಮಹಿಳೆ ಏಕಾಂಗಿಯಾಗಿ ಜವಾಬ್ದಾರರು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಈ ಅರ್ಜಿಯು ಆಕೆಯ ಅಹಂಕಾರವನ್ನು ತೋರಿಸುತ್ತದೆ. ಅವರು ಪಕ್ಷದ ವಕ್ತಾರರಾಗಿದ್ದರೆ ಏನು? ತನಗೆ ಸಾಕಷ್ಟು ಅಧಿಕಾರವಿದೆ ಎಂದು ಭಾವಿಸಿದ್ದಾರೆ. ದೇಶದ ಕಾನೂನನ್ನು ಗೌರವಿಸದೆ ಯಾವುದೇ ಹೇಳಿಕೆಯನ್ನು ನೀಡಬಹುದೇ ಎಂದು ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದರು.

ಟಿವಿ ಚರ್ಚೆ ಯಾವುದಕ್ಕಾಗಿ? ಅಭಿಮಾನಿಗಳ ಅಜೆಂಡಾಕ್ಕೆ ಮಾತ್ರವೇ? ಅವರು ಉಪನ್ಯಾಯಾಲಯದ ವಿಷಯವನ್ನು ಏಕೆ ಆರಿಸಿಕೊಂಡರು. ಆಂಕರ್ ಪ್ರಶ್ನಿಸಿದರು ಎಂಬ ಕಾರಣಕ್ಕೆ ಟೀಕೆಗಳನ್ನು ಮಾಡಬಹುದೇ? ಎಂದು ಕೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular