Friday, March 6, 2026
Google search engine
Homeಮುಖಪುಟಉತ್ತರ ಪ್ರದೇಶ - 10ನೇ ತರಗತಿ ವಿದ್ಯಾರ್ಥಿನಿಯರಿಗೆ ಮತ್ತು ಬರಿಸಿ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ

ಉತ್ತರ ಪ್ರದೇಶ – 10ನೇ ತರಗತಿ ವಿದ್ಯಾರ್ಥಿನಿಯರಿಗೆ ಮತ್ತು ಬರಿಸಿ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ

ಪ್ರಿನ್ಸಿಪಾಲ್ ಸರ್ ನಮಗೆ ಕಿರುಕುಳ ನೀಡಿದರು. ನಾವು 17 ಮಂದಿ ಇದ್ದೆವು. ನಾವು ಕಿಚಡಿ ಮಾಡಿದರೆ ಪ್ರಿನ್ಸಿಪಾಲ್ ಅದನ್ನು ಸರಿಯಾಗಿ ಬೇಯಿಸಿಲ್ಲ ಎಂದು ಹೇಳಿದರು. ನಂತರ ಪ್ರಿನ್ಸಿಪಾಲರು ತಯಾರಿಸಿ ನಮಗೆ ತಿನಿಸಿದರು. ಬಳಿಕ ಪ್ರಜ್ಞಾಹೀನರಾಗಿದ್ದೆವು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆಗಳಿಗೆ ತಯಾರಿ ನಡೆಸಲು ರಾತ್ರಿ ಉಳಿಯುವಂತೆ ಹೇಳಿದ ಪ್ರಿನ್ಸಿಪಾಲ್ ಮತ್ತು ಆತನ ಸಹಚರರು ಮಾದಕ ದ್ರವ್ಯ ಸೇವಿಸಿ 17 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ನಡೆದಿದೆ.

10ನೇ ತರಗತಿ ಓದುತ್ತಿದ್ದ 17 ಮಂದಿ ವಿದ್ಯಾರ್ಥಿನಿಯರಿಗೆ ಮತ್ತೊಂದು ಶಾಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಲಿದೆ. ಅದಕ್ಕಾಗಿ ತಯಾರಿ ನಡೆಸಲು ರಾತ್ರಿ ಶಾಲೆಯಲ್ಲೇ ಉಳಿಯಲು ಹೇಳಿ ಪ್ರಾಂಶುಪಾಲರು ಮತ್ತು ಅವರ ಸಹಚರರು ಈ ಹೀನ ಕೃತ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ ನವೆಂಬರ್ 18ರಂದು ಈ ಘಟನೆ ನಡೆದಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯ ಲೋಪಕ್ಕಾಗಿ ಸ್ಟೇಷನ್ ಹೌಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 328, 358 ಮತ್ತು 506 ಹಾಗೂ ಪೋಕ್ಸೋ ಕಾಯ್ದೆ ಸಂಬಂಧಿತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಅಭಿಷೇಕ್ ಯಾದವ್ ಹೇಳಿದ್ದಾರೆ

ಸ್ಥಳೀಯ ಶಾಸಕ ಪ್ರಮೋದ್ ಉತ್ವಾಲ್ ಮಧ್ಯಪ್ರವೇಶಿಸಿದ ನಂತರವೇ ದೂರು ದಾಖಲಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ 16-17 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ಯೋಗೇಶ್ ಬರುವಂತೆ ಕರೆದರು. ನಂತರ ಹುಡುಗಿಯರು ಕಾಪಿ ಬರುವಂತೆ ಹೇಳಿದರು. ಮರುದಿನ ಪ್ರಾಕ್ಟಿಕಲ್ ಇರುತ್ತದೆ ಹಾಗಾಗಿ ರಾತ್ರಿ ಇಲ್ಲೇ ಉಳಿಯವಂತೆ ತಿಳಿಸಿದರು.

ರಾತ್ರಿಗೆ ಹುಡುಗಿಯರು ಕಿಚಡಿ ತಯಾರಿಸಿದರೆ ಅದನ್ನು ಸರಿಯಾಗಿ ಬೇಯಿಸಿಲ್ಲ ಎಂದು ಪ್ರಾಂಶುಪಾಲರು ಹೇಳಿ ಅವರೇ ಅದನ್ನು ತಯಾರಿಸಿ ಹುಡುಗಿಯರಿಗೆ ತಿನ್ನಿಸಿದರು. ಹುಡುಗಿಯರು ಕಿಚಡಿ ತಿಂದ ನಂತರ ಪ್ರಜ್ಞೆ ಕಳೆದುಕೊಂಡರು ಮತ್ತು ನಂತರ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.

ತರಗತಿಯಲ್ಲಿ 29 ವಿದ್ಯಾರ್ಥಿಗಳಿದ್ದರೆ ಅದರಲ್ಲಿ ಹುಡುಗಿಯರನ್ನು ಮಾತ್ರ ಕರೆಯಲಾಗಿದೆ. ಮಕ್ಕಳಿಗೆ ಮತ್ತು ಬರುವಂತಹ ವಸ್ತುವನ್ನು ನೀಡಲಾಗಿದೆ. ಕಾನೂನುಬಾಹಿರ ತರಗತಿ ನಡೆಸುತ್ತಿರುವ ಶಾಲೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಪ್ರಿನ್ಸಿಪಾಲ್ ಸರ್ ನಮಗೆ ಕಿರುಕುಳ ನೀಡಿದರು. ನಾವು 17 ಮಂದಿ ಇದ್ದೆವು. ನಾವು ಕಿಚಡಿ ಮಾಡಿದರೆ ಪ್ರಿನ್ಸಿಪಾಲ್ ಅದನ್ನು ಸರಿಯಾಗಿ ಬೇಯಿಸಿಲ್ಲ ಎಂದು ಹೇಳಿದರು. ನಂತರ ಪ್ರಿನ್ಸಿಪಾಲರು ತಯಾರಿಸಿ ನಮಗೆ ತಿನಿಸಿದರು. ಬಳಿಕ ಪ್ರಜ್ಞಾಹೀನರಾಗಿದ್ದೆವು ಎಂದು ವಿದ್ಯಾರ್ಥಿನಿಯರ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular