Tuesday, March 3, 2026
Google search engine
Homeಮುಖಪುಟಭಾರತ ವಿಭಜನೆಗೆ ಆರ್.ಎಸ್.ಎಸ್ ಕಾರಣ, ಜಿನ್ನಾ ಅಲ್ಲ - ರಾಜ್ ಭರ್ ವಿವಾದಾತ್ಮಕ ಹೇಳಿಕೆ

ಭಾರತ ವಿಭಜನೆಗೆ ಆರ್.ಎಸ್.ಎಸ್ ಕಾರಣ, ಜಿನ್ನಾ ಅಲ್ಲ – ರಾಜ್ ಭರ್ ವಿವಾದಾತ್ಮಕ ಹೇಳಿಕೆ

ಮುಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿಯನ್ನಾಗಿ ಮಾಡಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ. ಭಾರತದ ವಿಭಜನೆಗೆ ಆರ್.ಎಸ್.ಎಸ್. ಕಾರಣವೇ ಹೊರತು ಜಿನ್ನ ಅಲ್ಲ ಎಂದು ಸುಹೆಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬುಧವಾರವಷ್ಟೇ ಜಿನ್ನಾ ಅವರನ್ನು ದೇಶದ ಮೊದಲ ಪ್ರಧಾನಿಯಾಗಿ ಮಾಡಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದ್ದರು ಈಗ ಅದೇ ಮಾತುಗಳನ್ನು ಪುನರುಚ್ಚರಿಸಿರುವ ರಾಜ್ ಭರ್ ಸ್ವತಂತ್ರ ಭಾರತದ ಮೊದಲ ಪ್ರಧಾನಿಯನ್ನಾಗಿ ಜಿನ್ನಾರನ್ನು ಮಾಡಿದ್ದರೆ ವಿಭಜೆಯಾಗುತ್ತಿರಲಿಲ್ಲ. ಭಾರತ ದೊಡ್ಡ ದೇಶವಾಗುತ್ತಿತ್ತು. ಯಾವುದೇ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಸಮಸ್ಯೆಗಳು ಮತ್ತು ವಿವಾದ ಸೃಷ್ಟಿಯಾಗುವುದಕ್ಕೆ ಸಂಘವೇ ಕಾರಣ ಎಂದು ದೂರಿದ್ದಾರೆ. ಅಲ್ಲದೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಮತ್ತು ಗೋವಿಂದ ವಲ್ಲಭ್ ಪಂತ್ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಜಿನ್ನಾ ದೇಶಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯಾ ನಂತರ ಜಿನ್ನಾ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular