Thursday, January 29, 2026
Google search engine
Homeಮುಖಪುಟಸಿದ್ದರಾಮಯ್ಯನವರ 16ನೇ ಬಜೆಟ್ ಮುಖ್ಯಾಂಶಗಳು

ಸಿದ್ದರಾಮಯ್ಯನವರ 16ನೇ ಬಜೆಟ್ ಮುಖ್ಯಾಂಶಗಳು

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ತಮ್ಮ ದಾಖಲೆಯ 16ನೇ ಬಜೆಟ್ ಅನ್ನು ಮಂಡಿಸಿದ್ದು ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಬಜೆಟ್ ಮುಖ್ಯಾಂಶಗಳು ಈ ಕೆಳಗಿನಂತಿವೆ.

  • ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂಪಾಯಿ ಗೌರವಧನ ಹೆಚ್ಚಳ
  • ಸಹಾಯಕರಿಗೆ 750 ರೂ ಸಹಾಯಧನ ಹೆಚ್ಚಳ
  • ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ 1000 ರೂ ಗೌರವಧನ ಹೆಚ್ಚಳ
  • 12 ಸಾವಿರ ಕೃಷಿ ಹೊಂಡಗಳ ನಿರ್ಮಾಣ
  • ಶಕ್ತಿ ಯೋಜನೆಗೆ 530 ಕೋಟಿ ರೂ ಅನುದಾನ
  • ಶಿಕ್ಷಣ ಇಲಾಖೆಗೆ 45,286 ಕೋಟಿ ಅನುದಾನ
  • ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ 2500 ಕೋಟಿ
  • ವಿಶ್ವ ಬ್ಯಾಂಕ್ ನೆರವಿನೊಂದಿಗೆ 2500 ಕೋಟಿ ಯೋಜನೆ
  • ಅತಿಥಿ ಶಿಕ್ಷಕರ ಗೌರವ ಧನ 2000 ರೂ ಹೆಚ್ಚಳ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,933 ಕೋಟಿ ಅನುದಾನ
  • ಇಂಧನ ಇಲಾಖೆಗೆ 26,896 ಕೋಟಿ ಅನುದಾನ
  • ಬೆಂಗಳೂರು ವಿವಿಗೆ ಮರುನಾಮಕರಣ-ಡಾ.ಮನಮೋಹನ್ ಸಿಂಗ್ ವಿವಿ ಎಂದು ನಾಮಕರಣ
  • ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನ ಯೋಜನೆ
  • 5 ಲಕ್ಷದವರೆಗೆ ಉಚಿತ ಚಿಕಿತ್ಸೆ
  • ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಅನ್ವಯ
  • ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಒಟಿಟಿ ಯೋಜನೆ
  • ಮಲ್ಟಿಪ್ಲೆಕ್ಸ್ ಗಳಲ್ಲಿ ಏಕರೂಪ ಟಿಕೆಟ್ ನಿಗದಿ
  • 200 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದ ಸರ್ಕಾರ
  • ಬೆಂಗಳೂರಿನಲ್ಲಿ ಟನಲ್ ಯೋಜನೆಗೆ40 ಸಾವಿರ ಕೋಟಿ ರೂ ಅನುದಾನ
  • ಬೆಂಗಳೂರಿನಲ್ಲಿ 11 ಪೊಲೀಸ್ ವಿಭಾಗ ಸ್ಥಾಪನೆ
  • ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ
  • ಬ್ರಾಡ್ ಬೆಂಗಳೂರಿಗೆ 1800 ಕೋಟಿ ರೂ ಮೀಸಲು
  • ಬ್ರಾಡ್ ಬೆಂಗಳೂರು ನಿರ್ಮಾಣಕ್ಕೆ 21 ಯೋಜನೆ
  • ಮೆಜೆಸ್ಟಿಕ್ ಬಸ್ ನಿಲ್ದಾಣ ಮೇಲ್ದರ್ಜೆಗೆ
  • ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ
  • ದಕ್ಷಿಣ ಕನ್ನಡದ ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರ ಸ್ಥಾಪನೆ
  • ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ
  • ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಯ ಘೋಷಣೆ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular